ಬಲ್ಲಾಳ ರಾಯನ ದುರ್ಗ ಕುದುರೆಮುಖ ಪರ್ವತಶ್ರೇಣಿಯಲ್ಲಿರುವ ಒಂದು ಪರ್ವತ. ಇದು
ಚಿಕ್ಕಮಗಳೂರಿನ ಪ್ರವಾಸಿ ಸ್ಥಳ. ದಕ್ಷಿಣಕನ್ನಡ ಮತ್ತು ಚಿಕ್ಕಮಗಳೂರಿನ ಗಡಿಯಲ್ಲಿದ್ದು ಮೂಡಿಗೆರೆ
ತಾಲೂಕಿನಲ್ಲಿರುವ ಸುಂಕಸಾಲೆ ಗ್ರಾಮದಲ್ಲಿದೆ
ಮಾರ್ಗ 1
ಇದೊಂದು ಪ್ರಶಸ್ತವಾದ ಚಾರಣ ಸ್ಥಳವಾಗಿದ್ದು, ದಕ್ಷಿಣ
ಕನ್ನಡ ಜಿಲ್ಲೆಯ ಮುಂಡಾಜೆಯಿಂದ ಬಂಡಾಜೆ ಅರ್ಬಿ ಜಲಪಾತಕ್ಕೆ ಚಾರಣ
ಮಾಡಿ ಅಲ್ಲಿಂದ ಮುಂದೆ 5 ಕಿ.ಮೀ ಚಾರಣ ಮಾಡಿದರೆ ಬಲ್ಲಾಳ ರಾಯನ ದುರ್ಗ ತಲುಪಬಹುದು
ಮಾರ್ಗ 2
ಕೊಟ್ಟಿಗೆಹಾರ ರಸ್ತೆಯಿಂದ ಕಳಸಕ್ಕೆ ಸಾಗುವ ಮಾರ್ಗದಲ್ಲಿ
ಸುಂಕಸಾಲೆ ಗ್ರಾಮದ ಬಳಿ ಒಂದು ರಸ್ತೆ ಎಡಕ್ಕೆ ಸಾಗಿದರೆ ಬಲ್ಲಾಳರಾಯನ
ದುರ್ಗದ ಬುಡ ತಲುಪಬಹುದು. ಕೋಟೆ ಇರುವ ಸ್ಥಳಕ್ಕೆ ಸಾಗಬೇಕಾದರೆ ಸುಮಾರು 3 ಕಿ.ಮಿ
ದೂರ ಬೆಟ್ಟಸಾಲುಗಳ ನಡುವೆ ಕಾಲ್ನಡಿಗೆಯಲ್ಲೆ ಸಾಗಬೇಕು
ಬಂಡಾಜೆಗೆ ಗುಡ್ ಬೈ ಹೇಳಿ ಹೊರಟಾಗ ಸಮಯ 7.30 ನಿಮಿಷ , ಇಲ್ಲಿಂದ ಹಾದಿ ನೆನ್ನೆ ಇದ್ದಷ್ಟು ಕಠಿಣವಾಗಿರಲಿಲ್ಲ . ಆದರೆ ಪ್ರಕೃತಿಯ ಸೊಬಗು ಸುಂದರವಾಗಿತ್ತು , ಇಲ್ಲಿಂದ ಕಾಣುವ ಕುದುರೆಮುಖದ ಬೆಟ್ಟದ ಸಾಲುಗಳ ಜೊತೆ ಮಂಜು ಸೇರಿ ಅದ್ಬುತವಾಗಿ ಕಾಣಿಸುತ್ತಿತ್ತು. ಇಲ್ಲಿ ಕ್ಯಾಮಾರದಲ್ಲಿ ಎಷ್ಟು ಪೋಟೊ ತೆಗೆದರು ತೃಪ್ತಿಯಾಗುತ್ತಿರಲಿಲ್ಲ.
ಸುಮಾರು 1 ಗಂಟೆ ಚಾರಣದ ನಂತರ ತಿಂಡಿಯ ಸಮಯ ನೆನ್ನೆ ಉಳಿದಿದ್ದ ಚಪಾತಿ ಜೊತೆಗೆ ಟಮೊಟೊ ಗೊಜ್ಜು ಖಾಲಿ ಮಾಡಿದೆವು. ಮತ್ತೆ ನಮ್ಮ ಪಯಣ ಬಲ್ಲಾಳರಾಯನ ದುರ್ಗದ ಕಡೆಗೆ ಮುಂದುವರೆಯಿತು. ಕೊನೆಯದಾಗಿ ನಾವು ದುರ್ಗ ತಲುಪಿದಾಗ 10 ಗಂಟೆ, ಕೋಟೆಯ ಒಂದು ಸುತ್ತು ಬರುವುದಕ್ಕೆ ಸುಮಾರು 1 ಗಂಟೆ ಬೇಕು ಅಷ್ಟು ಶಕ್ತಿ ನಮ್ಮಲಿರಲಿಲ್ಲ ಒಂಡೆರೆಡು ವೀವ್ ಪಾಯಿಂಟ್ ಗಳನ್ನು ನೋಡಿ ಕೊಂಡು ದುರ್ಗದಹಳ್ಳಿ ಕಡೆಗೆ ಹೊರೆಟೆವು.
ಇಲ್ಲಿಂದ ದುರ್ಗದಹಳ್ಳಿಗೆ 3 ಕಿ.ಮೀ ಗಳ ಚಾರಣ ನಾವು ಸುಮಾರು 45 ನಿಮಿಷದಲ್ಲಿ ಕೆಳೆಗೆ ಇಳಿದೆವು. ಅಲ್ಲಿಂದ ಆಟೋದಲ್ಲಿ ಸುಂಕಸಾಲೆ ತಲುಪಿದಾಗ ಸಮಯ 12.30 ನಿಮಿಷ, ಸುಂಕಸಾಲೆ ಯಿಂದ ಹೊರನಾಡು ಅನ್ನಪೂರ್ಣೇ ಶ್ವರಿ ದೇವಸ್ಥಾನಕ್ಕೆ 1 ಗಂಟೆಗಳ ಪಯಣ. ಬಸ್ಸಿನಲ್ಲಿ ಹೊರನಾಡು ತಲುಪಿದೆವು ದರ್ಶನ ಮುಗಿಸಿ ನಂತರ ಬೋಜನಾಲಯದಲ್ಲಿ ಊಟ ಮಾಡಿದೆವು ಸಮಯ 4 ಗಂಟೆ. ಬೆಂಗಳೂರಿಗೆ ಬಸ್ ಇದ್ದದ್ದು ರಾತ್ರಿ 8 ಗಂಟೆ ಈಗ ಹೊರನಾಡುವಿನ ಬೀದಿಗಳಲ್ಲಿ ಒಂದು ಸುತ್ತು ಹಾಕಿ ರಾತ್ರಿ ಮತ್ತೊಮ್ಮೆ ದರ್ಶನ ಮಾಡಿ ಹೊರೆಟೆವು.
No comments:
Post a Comment