ದೇವರಾಯನದುರ್ಗ

ಬೆಂಗಳೂರಿನಿಂದ ತುಮಕೂರು ರಸ್ತೆಯಲ್ಲಿ ದಾಬಸ್ ಪೇಟೆವರೆಗೂ(40 KM) ಹೋಗಿ ದಾಬಸ್ ಪೇಟೆಯಲ್ಲಿ ಬಲಕ್ಕೆ ಕೊರಟಗೆರೆ  ರಸ್ತೆಯಲ್ಲಿ  15 ಕಿ ಮೀ ಚಲಿಸಿದರೆ ಊರ್ಡಿಗೆರೆ ಸಿಗುತ್ತದೆ ಅಲ್ಲಿಂದ ದೇವರಾಯನದುರ್ಗ ಕ್ಕೆ  6 ಕಿ ಮೀ  ಪಯಣ.

ವಿಜಯನಗರದ  ಅರಸರ ಕಾಲದಲ್ಲಿ ಕರಿಗಿರಿ  ಎಂದು ಹೆಸರು ಕಾಲಾನಂತರ ಮುಂದೆ ಚಿಕ್ಕದೇವರಾಯ ಒಡೆಯರು ಗೆದ್ದದ್ದರಿಂದ ಇದು ದೇವರಾಯನದುರ್ಗ ವಾಯಿತು. ಬೆಟ್ಟದ ಮೇಲೆ ಯೋಗಾಲಕ್ಷ್ಮಿನರಸಿಂಹಸ್ವಾಮಿ ಮತ್ತು ಕೆಳಭಾಗದಲ್ಲಿ ಭೋಗಾಲಕ್ಷ್ಮಿನರಸಿಂಹಸ್ವಾಮಿ ದೇವಾಲಯಗಳಿವೆ

ನಾನು ಮತ್ತು ದಿನಕರ್ ಬೆಳಗ್ಗೆ ಬೆಂಗಳೂರಿನಿಂದ ಬೈಕ್ ಏರಿ ಹೊರಟಾಗ ಸಮಯ 10 ಗಂಟೆ  ಮದ್ಯೆ  ಊರ್ಡಿಗೆರೆಯಲ್ಲಿ ಒಂದು ಸಣ್ಣ ಟೀ ಬ್ರೆಕ್ ತೆಗೆದುಕೊಂಡು ಮುಂದಕ್ಕೆ ಹೊರೆಟೆವು ದೇವರಾಯನದುರ್ಗದ ಕ್ರಾಸ್ ನಲ್ಲಿ ಎಡಕ್ಕೆ ತಿರುಗಿದರೆ ಇಲ್ಲಿಂದ ಮುಂದಕ್ಕೆ ಅಕ್ಕ ಪಕ್ಕ ಹಸಿರಿನಿಂದ ಕೂಡಿರುವ ಮರ ಗಿಡಗಳ ಮದ್ಯೆ ಸಾಗುವುದೇ ಒಂದು ಸುಂದರ ಅನುಭವ.



 ಮೊದಲು ಊರಿನಲ್ಲಿ ಸಿಗುವ ಭೋಗಾಲಕ್ಷ್ಮಿನರಸಿಂಹಸ್ವಾಮಿ ದೇವಾಲಯಕ್ಕೆ ಹೋದೆವು ರಜಾ ದಿನವಾಗಿದ್ದರಿಂದ ಜನಸಂದಣಿ ಜಾಸ್ತಿ ಇತ್ತು ದರ್ಶನ ಮುಗಿಸಿ ಹೊರ ಬರಲು ಸುಮಾರು 1 ಗಂಟೆ ಬೇಕಾಯಿತು.





ಅಲ್ಲಿಂದ ಮೇಲಕ್ಕೆ ಘಾಟ್ ರಸ್ತೆಯಲ್ಲಿ ಬೆಟ್ಟದ ತುದಿಯವರೆಗೂ ಹೋದೆವು. ಇಲ್ಲಿ ಮೊದಲು ಕಾಣಿಸಿದ್ದು ಮೆಟ್ಟಿಲುಗಳನ್ನು ಏರುವ ಪ್ರವೇಶದ್ವಾರದಲ್ಲಿರುವ ಬಜ್ಜಿ ಅಂಗಡಿಗಳು, ಒಂದು ಸುತ್ತು ಬಜ್ಜಿಯ ಸವಿಯನ್ನು ಸವಿದು ಹೊರೆಟೆವು. 










ಇಲ್ಲಿಂದ ಸುಮಾರು 100 ಮೆಟ್ಟಿಲುಗಳನ್ನು ಏರಿ ಯೋಗಾಲಕ್ಷ್ಮಿನರಸಿಂಹಸ್ವಾಮಿ ದೇವಾಲಯಕ್ಕೆ ಬಂದಿದ್ದೆವು. 










ಇಲ್ಲಿ ಜನಸಂದಣಿ ಕಡಿಮೆ ಇತ್ತು ಸುಮಾರು 10 ನಿಮಿಷದಲ್ಲಿ ದರ್ಶನ ಮುಗಿಸಿ ಅಲ್ಲೆ ಪಕ್ಕದಲ್ಲಿದ್ದ ರಾಮತೀರ್ಥ ಕಲ್ಯಾಣಿ ಮುಂದಿನ ಕಾಲುದಾರಿಯಲ್ಲಿ ಎಡಕ್ಕೆ ತಿರುಗಿ ಗಿಡ ಬಳ್ಳಿಗಳ ಮದ್ಯೆ ತೂರಿ ಒಂದೆರೆಡು ಬಂಡೆಗಳನ್ನು ಏರಿ 15 ನಿಮಿಷದಲ್ಲಿ ಬೆಟ್ಟದ ನೆತ್ತಿಗೆ ಹೋಗಿದ್ದೆವು.  ಸ್ಥಳ ತುಂಬಾ ಪ್ರಶಾಂತವಾಗಿತ್ತು ಮತ್ತು ಸುತ್ತಲಿನ ಪರಿಸರ ಅದ್ಭುತವಾಗಿತ್ತು . 










ಇಲ್ಲಿಂದ ದಿನಕರ್ ಫೋಟೋ ಶೋಟ್ ಶುರುವಾಯಿತು...............













ಫೋಟೋ ಶೂಟ್ ಮುಗಿದ ನಂತರ ದಿನಕರ್  ಮನೆಯಿಂದ ತಂದಿದ್ದ  ಮೆಂತ್ಯ ಗಂಜಿ !! ತಿಂದು ಅಲ್ಲೆ ಸ್ವಲ್ಪ ಸಮಯ ವಿಶ್ರಾಂತಿ ಪಡೆದು ಮತ್ತೆ ಕೆಳೆಗೆ ಇಳಿದು ಪ್ರವೇಶದ್ವಾರದ ಬಳಿ ಬಂದಾಗ ಮತ್ತೊಮ್ಮೆ ಬಜ್ಜಿ ರುಚಿ ನೋಡಿ ಅಲ್ಲಿಂದ ಹೊರಟಾಗ ಸಮಯ ಸುಮಾರು 3 ಗಂಟೆ , ಬೆಂಗಳೂರು ತಲುಪಿದಾಗ ಸಂಜೆ 5 ಗಂಟೆ.








ಅರಿಶಿನಗುಂಡಿ ಜಲಪಾತ

DAY - 2 (18-09-2016)

ಬೆಳಗ್ಗೆ ಎದ್ದು ಬ್ರೆಷ್ ಮಾಡಿ ಎಲ್ಲರೂ ರೆಡಿಯಾಗಿ ಲೆಮನ್ ಟೀ ಕುಡಿದು ಭಟ್ಟರಿಗೆ ಧನ್ಯವಾದ ತಿಳಿಸಿ ಕರೆಕಟ್ಟೆ ಹೋಗುವ ದಾರಿಯಲ್ಲಿ ಚಾರಣ ಶುರು ಮಾಡಿದೆವು. ಸಮಯ ಸುಮಾರು 7.30 ನಿಮಿಷ.





ದಾರಿ  ಇಳಿಮುಖವಾಗಿದ್ದರಿಂದ  ಎಲ್ಲೂ ಬ್ರೇಕ್ ತೆಗೆದುಕೊಳ್ಳದೆ ಸುಮಾರು 1 ಗಂಟೆಯಲ್ಲಿ  ಸಂತೋಷ್ ಹೋಟಲ್ ತಲುಪಿದೆವು. ಇಲ್ಲಿಂದ ಅರಿಶಿನಗುಂಡಿ ಜಲಪಾತಕ್ಕೆ ಹೋಗುವ ಯೋಜನೆ ನಮ್ಮದಾಗಿತ್ತು. ಆದರೆ 2 ತೊಂದರೆ 1) ಅರಣ್ಯ ಇಲಾಖೆಯವರ ಅನುಮತಿ ಪಡೆಯ ಬೇಕು 2) ಗೈಡ್ ಇಲ್ಲದೆ ಚಾರಣ ಮಾಡಲು ಸಾಧ್ಯವಿಲ್ಲ.


ಮೊದಲನೆಯದಾಗಿ ಹೋಟೆಲ್ ನಲ್ಲಿ ಗೈಡ್ ಬಗ್ಗೆ ವಿಚಾರಿಸಿದೆವು ಅವರು ದೂರವಾಣಿ ಮೂಲಕ ಸಂಪರ್ಕಿಸಿ 1/2 ಗಂಟೆ ಯಲ್ಲಿ ಬರುವರೆಂದು ತಿಳಿಸಿದರು ಒಂದು ಕೆಲಸ ಮುಗಿದಿತ್ತು. ಎರಡೆನೆಯದು ಅನುಮತಿ ಹೋಟೆಲ್ ಎದುರುಗಡೆ ಇದ್ದ ಅರಣ್ಯ ಇಲಾಖೆಯ ಕಛೇರಿಗೆ ನರೇಶ್ ಮತ್ತು ದಿನಕರ್ ಅನುಮತಿ ಪಡೆಯಲು ಹೋದರು, ನರೇಶ್ ಗೆ ಅರಣ್ಯ ಇಲಾಖೆಯಲ್ಲಿ ಪರಿಚಯವಿರುವವರಿಂದ ದೂರವಾಣಿ ಮಾಡಿಸಿ ಅನುಮತಿ ಪಡೆಯಲು ಸಫಲರಾದರು. ಈಗ ನೆಮ್ಮದಿಯಿಂದ ಎಲ್ಲರೂ ಇಡ್ಲಿ ತಿಂದು ಮದ್ಯಾಹ್ನಕ್ಕೂ ಪಾರ್ಸಲ್ ಮಾಡಿಸಿಕೊಡೆವು. ಗೈಡ್ ಇನ್ನು ಬಂದಿರಲಿಲ್ಲ. ಧನರಾಜ್ ಮತ್ತು ದಿನಕರ್ ಜಿಗಣೆಯಿಂದ ತಪ್ಪಿಸಿಕೊಳ್ಳಲು ವಿಶೇಷವಾದ ಪಾನೀಯ(ನಶೆ , ಉಪ್ಪು, ಸುಣ್ಣ ಮತ್ತು ನೀರು) 4 ಬಾಟಲ್ ಗಳನ್ನು ರೆಡಿಮಾಡಿದರು


 ಅಷ್ಟರಲ್ಲಿ ಗೈಡ್ ಬಂದರು ಹೆಸರು ರಾಜು , ಸಂತೋಷ್ ಹೋಟಲಿನಿಂದ ಕರೆಕಟ್ಟೆ ಬರುವ ದಾರಿಯಲ್ಲಿ 1/2 ಕಿ.ಮೀ ನಡೆದು ಎಡಕ್ಕೆ ಕಾಡಿನ ಒಳಗೆ ಪ್ರವೇಶಿಸಿದೆವು. 





ಇಲ್ಲಿಂದ ಮುಂದೆ ಯಾವುದೇ ದಾರಿ ಇರಲಿಲ್ಲ ಗೈಡ್ ರಾಜುರವರು ಮುಂದೆ ದಾರಿ ಮಾಡಿಕೊಂಡು ಹೋಗುತ್ತಿದ್ದರು ನಾವು ಅವರ ಹಿಂದೆ ಸಾಗುತ್ತದ್ದೆವು. ದಾರಿ ತುಂಬಾ ಜಾರುತಿತ್ತು ಮತ್ತು ಜಿಗಣೆಗಳ ಕಾಟ ಶುರುವಾಯಿತು. ಎಲ್ಲೂ ನಿಲ್ಲುವವಾಗಿರಲಿಲ್ಲ ನಿಂತರೆ 4 ರಿಂದ 5 ಜಿಗಣೆಗಳು ಕಾಲುಗಳ ಮೇಲೆ ಹಾಜರಾಗುತ್ತಿದ್ದವು. 



ಸುಮಾರು 30 ನಿಮಿಷದ ನಂತರ ನೀರಿನ ತೊರೆ ಸಿಕ್ಕಿತು ಇದನ್ನು ದಾಟಿದೆವು. ಮುಂದೆ ಏರು ದಾರಿಯಲ್ಲಿ ನಡೆದು ಜೀಪ್ ಟ್ರಾಕ್ (ಕಚ್ಚಾ ರಸ್ತೆ) ತಲುಪಿದೆವು. ಇಲ್ಲಿಂದ ಮತ್ತೆ ಬಲಕ್ಕೆ ಇಳಿಜಾರಿನಲ್ಲಿ ಇಳಿದೆವು ಇಲ್ಲಿ ಯಾವುದೇ ಕಾಲುದಾರಿ ಇರಲಿಲ್ಲ ಸಲ್ಪ ದೂರ ಸಾಗಿದ ಮೇಲೆ ರಾಜುರವರು ದಾರಿ ತಪ್ಪಿದ್ದರು ಎಲ್ಲರೂ ಆತಂಕಕ್ಕೆ ಒಳಗಾದೆವು ಏಕೆಂದರೆ ಜಿಗಣೆಗಳ ಕಾಟ ಎಷ್ಟಿಂತೆಂದರೆ ಊಹಿಸಲು ಸಾಧ್ಯವಿಲ್ಲ. ಅಂತಿಮವಾಗಿ ಗೈಡ್ ರಾಜುರವರ ಪ್ರಯತ್ತದಿಂದ ಬಹಳ ಸಮಯದ ನಂತರ ಒಂದು ಕಾಲು ದಾರಿಗೆ ಸೇರಿದೆವು ಅಲ್ಲಿಂದ ಮುಂದೆ 10 ನಿಮಿಷದಲ್ಲಿ ಜಲಪಾತದ ಮುಂದೆ ಬಂದು ನಿಂತಿದ್ದೆವು, ಇಲ್ಲಿಯವರೆಗೂ ಅನುಭವಿಸಿದ ಕಷ್ಟವೆಲ್ಲ್ಲಾ ಒಂದೇ ಕ್ಷಣದಲ್ಲಿ ಮಾಯವಾಗಿತ್ತು.









    ನೀರಿನಲ್ಲಿ ತುಂಬಾ ಸಮಯ ಕಳೆದ ನಂತರ  ತಂದಿದ್ದ  ಇಡ್ಲಿ ತಿಂದು ಮತ್ತೆ 30 ನಿಮಿಷ ನಡೆದು ಜೀಪ್ ಟ್ರಾಕ್ ತಲುಪಿದೆವು. ಗೈಡ್ ರಾಜುರವರಿಗೆ ಧನ್ಯವಾದ ತಿಳಿಸಿ ಅವರನ್ನು ಕಳುಹಿಸಿ ನಾವು ಮೂಕಾಂಬಿಕೆ ಆಭಯಾರಣ್ಯದ ಪ್ರವೇಶ ದ್ವಾರಕ್ಕೆ ಜೀಪ್ ಟ್ರಾಕ್ ನಲ್ಲಿ ಹೊರೆಟೆವು ಇಲ್ಲಿಂದ ಪ್ರವೇಶ ದ್ವಾರಕ್ಕೆ  ಸುಮಾರು 7 ಕಿ. ಮೀ ದೂರ. ಸುಮಾರು 1.30 ನಿಮಿಷಗಳ ಸತತವಾಗಿ ಕಾಡಿನಲ್ಲಿ ನಡೆದು ಮುಖ್ಯದ್ವಾರ ತಲುಪಿದಾಗ ಸಮಯ ಸುಮಾರು 2.30 ನಿಮಿಷ. ಇಲ್ಲಿಂದ ಆಟೋನಲ್ಲಿ ಕೊಲ್ಲೂರಿಗೆ(2ಕಿ.ಮೀ) ಹೋಗಿ ಮೂಕಾಂಬಿಕೆ ದರ್ಶನ ಪಡೆದೆವು.
 


 ಇಲ್ಲಿಗೆ ನಮ್ಮ 2 ದಿನದ ಹಿಡ್ಲುಮನೆ ಜಲಪಾತ - ಕೊಡಚಾದ್ರಿ -ಅರಿಶಿನಗುಂಡಿ ಜಲಪಾತ ಚಾರಣ ಯಶಸ್ವಿಯಾಗಿತ್ತು ಮತ್ತು ಚಾರಣದ ಪ್ರತಿಯೊಂದು ಕ್ಷಣವು ನಮ್ಮ  ನೆನಪಿನಲ್ಲಿ ಸದಾ ಕಾಲ ಉಳಿಯುವಂತಾಯಿತು.

ಮಾಹಿತಿ:
ಕೊಡಚಾದ್ರಿಯ ಪವಿತ್ರಭಟ್ಟರ ರ  ಸಂಖ್ಯೆ :
ಅರಿಶಿನಗುಂಡಿಯ ಗೈಡ್ ರಾಜುರವರ ಸಂಖ್ಯೆ : 9535796525



ಕೊಡಚಾದ್ರಿ



ಹಿಡ್ಲುಮನೆ ಜಲಪಾತದಲ್ಲಿ  ಸುಮಾರು 1/2 ಗಂಟೆ ಕಳೆದ ಮೇಲೆ ಜಲಪಾತದ ಬಲಕ್ಕೆ ಇರುವ ಕಾಲು ದಾರಿಯಲ್ಲಿ ಚಾರಣ ಶುರುವಾಯಿತು.




 ಇಲ್ಲಿಂದ ಮುಂದಕ್ಕೆ ದಾರಿ ತುಂಬಾ ಕಠಿಣವಾಗಿತ್ತು, ದಾರಿ ತುಂಬಾ ಏರು ಮುಖವಾಗಿತ್ತು. ಸುಮಾರು 1 ಗಂಟೆ ನಡೆದ ಮೇಲೆ ಮೊದಲ ವೀಕ್ಷಣ ಸ್ಥಳಕ್ಕೆ ಬಂದೆವು. ಸಮಯ ಸುಮಾರು 12 ಗಂಟೆ ಇಲ್ಲಿಂದ ಸುತ್ತಲಿನ ಚಿತ್ರಣ ತುಂಬಾ ಸೊಗಸಾಗಿತ್ತು ಮತ್ತು ಹಸಿರಿನಿಂದ ಕೂಡಿತ್ತು .




ಸ್ವಲ್ಪ ವಿಶ್ರಾಂತಿ ಪಡೆದು ಮುಂದಕ್ಕೆ ಪ್ರಯಾಣ ಬೆಳೆಸಿದೆವು ಮುಂದೆ ಕಾಲು ದಾರಿ ಮುಗಿದು ಜೀಪ್ ರಸ್ತೆಗೆ ಸೇರಿದೆವು ಇಲ್ಲಿಂದ ಸುಮಾರು 1/2 ಗಂಟೆ  ಕಾಲ ಜೀಪ್ ರಸ್ತೆಯಲ್ಲಿ ನಡೆದು ಮೂಕಾಂಬಿಕೆಯ ಮೂಲ ದೇವಸ್ಥಾನ ಬಳಿ ಬಂದಿದ್ದೆವು.




ಮೊದಲನೆಯದಾಗಿ ಅಲ್ಲೆ ಪಕ್ಕದಲ್ಲಿ ಇದ್ದ ಪೂಜಾರಿಯವರ ಮನೆಗೆ ತೆರಳಿ ರಾತ್ರಿ ಉಳಿದುಕೊಳ್ಳಲು ಜಾಗಕ್ಕೆ ವಿಚಾರಿಸಿದೆವು. ಪೂಜಾರಿಗಳಾದ ಪವಿತ್ರ ಭಟ್ ರವರು ಮನೆಯಲ್ಲಿ ಜಾಗ ಕೊಡಲು ಒಪ್ಪಿದರು ಮತ್ತು ಊಟಕ್ಕೂ ವ್ಯವಸ್ಥೆ ಮಾಡಿದರು. ನಮ್ಮ ಲಗೇಜ್ ಗಳನ್ನು ಅವರ ಮನೆಯಲ್ಲಿ ಇಟ್ಟು ಊಟ ಮುಗಿಸಿದೆವು(ಅನ್ನ ಸಾಂಬಾರ್ , ಪಲ್ಯ ಮತ್ತು ಮಜ್ಜಿಗೆ) ಸಮಯ ಸುಮಾರು 3 ಗಂಟೆ.

ಇಲ್ಲಿಂದ ನಮ್ಮ ಪಯಣ ಕೊಡಚಾದ್ರಿಯ ಸರ್ವಜ್ಞ ಪೀಠದ ಕಡೆಗೆ  ಮೊದಲು ಸಿಕ್ಕಿದ್ದು ಗಣಪತಿ ಗುಹೆ



ನಂತರ 20 ನಿಮಿಷ ನಡೆದ ನಂತರ ತುದಿಗೆ ಅಂದರೆ ಸರ್ವಜ್ಞ ಪೀಠದ ಬಳಿ ಬಂದೆವು  ಅಷ್ಟರಲ್ಲಿ ಪೂರ್ತಿಯಾಗಿ ಮಂಜು ಕವಿಯಿತು.



ಇಲ್ಲಿಂದ ಮುಂದೆ ಚಿತ್ತಮೂಲ ಕಡೆಗೆ ಹೊರೆಟೆವು ತುಂಬಾ ಕಿರಿದಾದ ಮತ್ತು ಇಳಿಜಾರದ ದಾರಿಯಲ್ಲಿ ಸುಮಾರು 15 ನಿಮಿಷ ನಡೆದ ನಂತರ ಚಿತ್ತಮೂಲ ತಲುಪಿದೆವು. ಇದು ಸೌಪರ್ಣಿಕ ನದಿಯ ಉಗಮ ಸ್ಥಾನ , ಚಿತ್ರಮೂಲದ ಕಲ್ಲು ಬಂಡೆಯ ನಡುವೆ ಯಾವಾಗಲೂ ನೀರು ಹನಿಯುತ್ತಿರುತ್ತದೆ.  



ಮತ್ತೆ ವಾಪಸ್ ಸರ್ವಜ್ಞ ಪೀಠಕ್ಕೆ ಬಂದು ಅಲ್ಲಿಂದ ಕೆಳಕ್ಕೆ ಅಂದರೆ ಭಟ್ಟರ ಮನೆಗೆ ಬಂದಾಗ ಸಮಯ ಸುಮಾರು 6.30 ನಿಮಿಷ,


ಭಟ್ಟರ ಮನೆಯಲ್ಲಿ ಸುಮಾರು ಹೊತ್ತು ಹರಟೆ ಹೊಡೆದು 8 ಗಂಟೆಗೆ ಊಟಕ್ಕೆ ಹೊರೆಟೆವು, ಹೊಟ್ಟೆ ಖಾಲಿಯಾಗಿತ್ತು ಅನ್ನ ಸಾಂಬಾರ್ ರುಚಿಯಾಗಿತ್ತು ಎರೆಡೆರೆಡು ಸುತ್ತು ತಿಂದು ಭಟ್ಟರ ಮನೆಗೆ ಬಂದೆವು, ಅಷ್ಷರಲ್ಲಿ ಭಟ್ಟರು ಮಲಗಲು ಚಾಪೆ ಮತ್ತು ಹೊದಿಕೆ ಗಳನ್ನು ತಂದು ಕೊಟ್ಟರು ಎಲ್ಲರೂ ಸೇರಿ ಅದನ್ನು ಹಾಸಿ ಮಲಗಳು ರೆಡಿ ಮಾಡಿದೆವು, ನಾಳೆಯ ಚಾರಣದ ಬಗ್ಗೆ (ಅರಿಶಿನಗುಂಡಿ ಜಲಪಾತ) ಮಾತುಕತೆ ನಡೆಸಿ ಬೆಳಗ್ಗೆ ಬೇಗ ಹೊರಡುವುದೆಂದು ತೀರ್ಮಾನಿಸಿ ನಿದ್ದೆಗೆ ಜಾರಿದೆವು , ರಾತ್ತಿಯೆಲ್ಲಾ ಜೋರು ಮಳೆ.

ನಮ್ಮ ನಾಳಿನ ಪಯಣ ಅರಿಶಿನ ಗುಂಡಿ ಜಲಪಾತಕ್ಕೆ