Netgod Waterfalls: (ನೆಟ್ಗೋಡ್ ಜಲಪಾತ)


Netgod falls is a beautiful and hidden waterfall near Siddapur of Uttara Kannada District,  It is a two-step waterfall which is located at a distance of 35 km from Siddapur in Siddapur - Kumta road.

After travelling 28km from Siddapur towards Kumta you will reach a village called Birlamakki. In Birlamakki take the left road that leads to Kodigadde  for 3 km to reach belevanthe bus stand, from there take mud road on right. After 3 km you will reach a village called Netgod/Bilegod













ಶಿವಪುರ (ಪ್ರಕೃತಿಯ ಮಡಿಲಲ್ಲಿ ಒಂದು ಪುಟ್ಟ ಗ್ರಾಮ)

 ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ 50 ಮನೆಗಳಿರುವ ಪುಟ್ಟ ಹಳ್ಳಿ ಶಿವಪುರ . ದಶಕದ ಹಿಂದೆ ಕೊಡಸಳ್ಳಿ ಜಲವಿದ್ಯುತ್ ಯೋಜನೆಗಾಗಿ ಕಾಳೀ ನದಿಗೆ ಕಟ್ಟಿದ ಅಣೆಕಟ್ಟಿನಿಂದಾಗಿ ಕೊಡಸಳ್ಳಿಯನ್ನು ನೀರು ನುಂಗಿತು. ಶಿವಪುರವನ್ನು ಸಂಪರ್ಕಿಸುವ ಎಲ್ಲಾ ದಾರಿಗಳನ್ನು ಹಿನ್ನೀರು ಮುಳುಗಡೆ ಮಾಡಿತು. ಮೊದಲು ಹಿನ್ನೀರು ದಾಟಲು ಅಪಾಯಕಾರಿಯಾದ ದೇಸಿ ತೆಪ್ಪ ಉಪಯೋಗಿಸಿದ್ದರು.

2015 ರಲ್ಲಿ ಇಲ್ಲಿ ತೂಗುಸೇತುವೆ ನಿರ್ಮಾಣವಾಯಿತು, ಈ ತೂಗುಸೇತುವೆ ಈಗ ಯಲ್ಲಾಪುರದ ಪ್ರಮುಖ ಆಕರ್ಷಣೆಯಾಗಿದೆ.

 ಉಳವಿ ಕಡೆಯಿಂದ ಶಿವಪುರಕ್ಕೆ 7 ಕಿ.ಮೀ ಗಳ ದಟ್ಟ ಕಾಡಿನ ಮಧ್ಯೆ ಕಲ್ಲು ಮಣ್ಣಿನ ರಸ್ತೆ ಈ ರಸ್ತೆಯಲ್ಲಿ ಬೈಕ್ ನಲ್ಲಿ ಹೋಗುವುದು ಕಷ್ಟ,(ಈ ರಸ್ತೆ ಅಭಿವೃದ್ದಿ ಹಲವು ವರ್ಷಗಳ ಬೇಡಿಕೆ , ಈ ಸಲ  ಗ್ರಾಮ ಪಂಚಾಯತಿಯ ಚುನಾವಣೆ ಕೂಡ ಬಹಿಷ್ಕರಿಸಿದ್ದರು ಎಂಬ ವರದಿ ಇದೆ. ಪ್ರವಾಸ ಹೋದ ನಮಗೆ ಒಂದು ದಿನ ಈ ರಸ್ತೆಯಲ್ಲಿ ಬೈಕ್ ಓಡಿಸುವುದು ರೋಚಕವಾಗಿತ್ತು. ಆದರೆ ದಿನ ನಿತ್ಯ ಸಂಚಾರ .....)

  ದಟ್ಟ ಕಾಡಿನ ಮಧ್ಯೆ ಈ ದಾರಿಯಲ್ಲಿ ಚಾರಣದ ಅನುಭವ ಅದ್ಬುತವಾಗಿರುತ್ತದೆ. ಶಿವಪುರದಲ್ಲಿ ಒಂದು ಮಠವಿದೆ ದಟ್ಟ ಕಾಡಿನ ನಡುವೆ ಪ್ರಶಾಂತವಾದ ವಾತಾವರಣದಲ್ಲಿ ಶಿವನ ಆಲಯ, ಇಲ್ಲಿ ಬರುವ ಭಕ್ತರಿಗೆ ನಿತ್ಯವು ದಾಸೋಹ ಸಹ ಇದೆ. ಇಲ್ಲಿಂದ ತೂಗುಸೇತುವೆಗೆ 3 ಕಿ.ಮೀ ದಾರಿ (ಯಲ್ಲಾಪುರ ದಿಂದ ಸಾತೋಡಿ ಮಾರ್ಗದಲ್ಲಿ ಬಂದರೆ  ಮೊದಲು ತೂಗು ಸೇತುವೆ ನಂತರ ಮೂರು ಕಿ.ಮೀ ಚಾರಣ ಮಾಡಿದರೆ ಶಿವಪುರ ಮಠ ಸಿಗುತ್ತದೆ , ಬೈಕ್ ಇದ್ದರೆ ತೂಗುಸೇತುವೆ ಮೇಲೆ ಬರಬಹುದು).

























ಉಳವಿ ಕ್ಷೇತ್ರ

 ಉಳವಿ ಕ್ಷೇತ್ರವು ಉತ್ತರ ಕನ್ನಡ ಜಿಲ್ಲೆಗೆ ಸೇರಿದ ಸುಪ ತಾಲ್ಲೂಕಿನ ಪವಿತ್ರ ಯಾತ್ರಾ ಸ್ಥಳವಾಗಿದೆ. ಇಲ್ಲಿ ಪ್ರಖ್ಯಾತ ಚನ್ನಬಸವೇಶ್ವರ ದೇವಾಲಯವಿದೆ. ಇದು ಕಾರವಾರದಿಂದ ಸುಮಾರು 75 ಕಿ.ಮೀ.ದೂರದಲ್ಲಿದೆ. ಲಿಂಗಾಯತ ಜನರು ಬಹುವಾಗಿ ಗೌರವಿಸುವ ಚನ್ನಬಸವಣ್ಣನವರ ಸಮಾಧಿ ಇಲ್ಲಿ ಇದೆ.

12ನೆಯ ಶತಮಾನದಲ್ಲಿ ಕಲ್ಯಾಣದ ಕ್ರಾಂತಿಯಾದ ಮೇಲೆ ವೀರಶೈವರು ಯಲ್ಲಾಪುರ ಮತ್ತು ಗಣೇಶನ ಗುಡಿ ರಸ್ತೆಯಿಂದ ಉಳುವಿಯನ್ನು ಪ್ರವೇಶಿಸಿದರು.  ವಲಸೆ ಬಂದ ಶರಣರ ಮಾರ್ಗದರ್ಶಿಗಳಾಗಿ ಚೆನ್ನಬಸವಣ್ಣ, ಅಕ್ಕನಾಗಮ್ಮ ಮುಂತಾದ ಇನ್ನೂ ಅನೇಕ ಶರಣರೂ ವಚನಕಾರರೂ ಇಲ್ಲಿಗೆ ಬಂದರು. ಇಲ್ಲಿಯೇ ವೀರಶೈವ ಧರ್ಮದ ಭವಿಷ್ಯತ್ತಿನ ಬಗ್ಗೆ ಯೋಜನೆಗಳನ್ನು ರೂಪಿಸಿ ಧರ್ಮಪ್ರಚಾರ ಕೈಕೊಳ್ಳಲಾಯಿತು. ಚೆನ್ನಬಸವಣ್ಣನವರು  ಇಲ್ಲಿ ಲಿಂಗೈಕ್ಯರದರು. 

ಉಳವಿಯ ಚನ್ನಬಸವೇಶ್ವರ ದೇವಸ್ಥಾನಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ. ಕಲ್ಯಾಣ ಕ್ರಾಂತಿಯ ಬಳಿಕ ವಚನಗಳನ್ನು ಸಮಾಜಕ್ಕೆ ಸಾರುತ್ತ ಸಂಚಾರ ಕೈಗೊಂಡ ಚನ್ನಬಸವಣ್ಣನವರು ಕೊನೆಗೆ ಉಳವಿಗೆ ಬಂದು ಅನುಷ್ಠಾನ ನಡೆಸಿದರು. ಬಳಿಕ ಅಲ್ಲಿಯೇ ನಿರ್ವಿಕಲ್ಪ ಸಮಾಧಿ ಹೊಂದಿದರು ಎಂಬ ಐತಿಹ್ಯವಿದೆ.

ಕೇವಲ ಧಾರ್ಮಿಕ ದೃಷ್ಟಿಯಿಂದಲ್ಲದೆ ಈ ಕ್ಷೇತ್ರವು ತನ್ನಲ್ಲಿರುವ ಅದ್ಭುತ ಪ್ರಕೃತಿ ಸೌಂದರ್ಯದಿಂದಾಗಿಯೂ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ಹೊರಹೊಮ್ಮಿದೆ. ಪಶ್ಚಿಮ ಘಟ್ಟಗಳ ಸುಂದರ ವನ್ಯ ಸಂಪತ್ತಿನಲ್ಲಿ ನೆಲೆಸಿರುವ ಈ ತಾಣವು ಆಕರ್ಷಕ ಗುಹೆಗಳು ಹಾಗು ನೀರ್ಗೋಲುಗಳಿಂದ ಕಂಗೊಳಿಸುತ್ತದೆ.

ತಲುಪುವ ಬಗೆ:

ದಾಂಡೇಲಿಯಿಂದ ಕಾಳಿ ನದಿಯನ್ನು ದಾಟುವುದರ ಮೂಲಕ ಉಳವಿಗೆ ಭೇಟಿ ನೀಡಬಹುದು. ದಾಂಡೇಲಿಯಿಂದ 11 ಕಿ.ಮೀ ಚಲಿಸಿದನಂತರ ಪಟೋಲಿ ಕ್ರಾಸ್ ಸಿಗುತ್ತದೆ. ಈ ಕ್ರಾಸ್ ನಿಂದ ಉಳವಿಗೆ ತೆರಳಲು ಎರಡು ಆಯ್ಕೆಗಳಿವೆ. ಮೊದಲನೆಯದು ಸಾಮಾನ್ಯವಾದ ಕುಂಬಾರವಾಡಾ ಹಾಗು ಜೋಯಿಡಾದ ಮುಲಕ. ಎರಡನೆಯದು ರೋಮಾಂಚನಕಾರಿ ಅನುಭೂತಿ ನೀಡುವ ಗೂಂಧ್ ಹಾಗು ಸಿಂಥೇರಿ ಬಂಡೆಗಳ ಮೂಲಕ. ಎರಡು ಮಾರ್ಗವು ಅತ್ಯುತ್ಸಾಹದ ಮಾರ್ಗವಾಗಿದ್ದು ಹಲವು ಪ್ರಾಕೃತಿಕ ವಿಶೇಷತೆಗಳನ್ನು ಕಾಣುತ್ತ ಸಾಗಬಹುದು. ಈ ಪ್ರಯಾಣವು ಸದಾ ನೆನಪಿನಳ್ಳುಳಿಯುವ ಪ್ರವಾಸವಾಗಿದೆ.













ಮಧುಕೇಶ್ವರ ದೇವಸ್ಥಾನ (ಬನವಾಸಿ)

 ಮಧುಕೇಶ್ವರ ದೇವಸ್ಥಾನ (ಬನವಾಸಿ)

ಮಧುಕೇಶ್ವರ ದೇವಾಲಯವು  ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿದೆ.ಸುಮಾರು 1700 ವರ್ಷದ ಹಿಂದೆ ಕದಂಬರ ಕಾಲದಲ್ಲಿ ದೇವಾಲಯವನ್ನು ಕಟ್ಟಲಾಗಿದೆ.ಪ್ರಸಿದ್ಧ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಈ ದೇವಾಲಯವನ್ನು ನಿರ್ಮಿಸಿದನೆಂದು ನಂಬಲಾಗಿದೆ.ಪವಿತ್ರ ವರದಾ ನದಿಯು ದೇವಾಲಯದ ಎದುರಿಗೆ ಹರಿಯುತ್ತಿದೆ.

ಮಧುಕೇಶ್ವರ ದೇವಸ್ಥಾನದ ಜೇನು ತುಪ್ಪದ ಬಣ್ಣದಲ್ಲಿರೋ ಶಿವಲಿಂಗ. ಅಲ್ಲದೇ ಮೋನೋಲಿತಾ ಆಸ್ತಾನ ಮಂಟಪ, ತ್ರಿಲೋಕ ಮಂಟಪ, ಹಾಗೂ ದೊಡ್ಡ ನಂದಿ.ಅಷ್ಟೇ ಅಲ್ಲದೇ ದ್ರಾವಿಡರ ಕಾಲದ ವೀರಭದ್ರ ದೇವಾಲಯವೂ ಎಂಥವರನ್ನೂ ಆಕರ್ಷಿಸುತ್ತದೆ.

ದೇವಾಲಯ ಪ್ರವೇಶಿಸುವಾಗ ಮೊದಲು ಎದುರಾಗುವುದು ಎರಡು ಆನೆಗಳ ಆಕೃತಿಗಳು. ಮತ್ತೊಂದು ಸುತ್ತಿನಲ್ಲಿ 7 ಅಡಿ ಎತ್ತರದ  ಏಕಶೀಲ ನಂದಿ ನಿಮ್ಮನ್ನು ಸ್ವಾಗತಿಸುತ್ತದೆ.  ಈ ನಂದಿಯ ಒಂದು ಕಣ್ಣು ಮಧುಕೇಶ್ವರನ ಕಡೆಗೆ ದೃಷ್ಟಿ ನೆಟ್ಟರೆ  ಮತ್ತೊಂದು ಗುಡಿಯಲ್ಲಿರುವ ಪಾರ್ವತಿಯತ್ತ ನೋಡುತ್ತಿರುವುದು ವಿಶೇಷ. ಗುಡಿಯನ್ನು ಎಷ್ಟು ಸೂಕ್ಷ್ಮವಾಗಿ ನಿರ್ಮಿಸಲಾಗಿದೆ ಎಂದರೆ ಯಾವ ಕಂಬವೂ ದೇವರಿಗೆ ಎಲ್ಲಿಂದರೂ ಅಡ್ಡವಾಗುವುದಿಲ್ಲ...

ಇಲ್ಲಿ ಇನ್ನೊಂದು ವಿಶೇಷವೂ ಇದೆ. ಇದಕ್ಕೂ ವಾರಣಾಸಿಗೂ ನೇರ ಸಂಬಂಧವಿದೆ. ಗುಡಿಯ ಬಲಭಾಗಕ್ಕೆ ಅನನ್ಯವಾದ ಅರ್ಧಗಣಪತಿಯ ಮೂರ್ತಿಯಿದೆ.ಇದರ ಇನ್ನೊಂದು ಅರ್ಧಭಾಗ ವಾರಣಾಸಿಯಲ್ಲಿದೆಯೆಂದು ನಂಬಲಾಗಿದೆ

ಕರ್ನಾಟಕ ರಾಜ್ಯ ಸರಕಾರ ಇಲ್ಲಿ ವರ್ಷಕೊಮ್ಮೆ ಡಿಸೆಂಬರ್‌ನಲ್ಲಿ ಕದಂಬೊತ್ಸವ ಆಯೋಜಿಸುತ್ತದೆ...