ಕೊಡಚಾದ್ರಿ



ಹಿಡ್ಲುಮನೆ ಜಲಪಾತದಲ್ಲಿ  ಸುಮಾರು 1/2 ಗಂಟೆ ಕಳೆದ ಮೇಲೆ ಜಲಪಾತದ ಬಲಕ್ಕೆ ಇರುವ ಕಾಲು ದಾರಿಯಲ್ಲಿ ಚಾರಣ ಶುರುವಾಯಿತು.




 ಇಲ್ಲಿಂದ ಮುಂದಕ್ಕೆ ದಾರಿ ತುಂಬಾ ಕಠಿಣವಾಗಿತ್ತು, ದಾರಿ ತುಂಬಾ ಏರು ಮುಖವಾಗಿತ್ತು. ಸುಮಾರು 1 ಗಂಟೆ ನಡೆದ ಮೇಲೆ ಮೊದಲ ವೀಕ್ಷಣ ಸ್ಥಳಕ್ಕೆ ಬಂದೆವು. ಸಮಯ ಸುಮಾರು 12 ಗಂಟೆ ಇಲ್ಲಿಂದ ಸುತ್ತಲಿನ ಚಿತ್ರಣ ತುಂಬಾ ಸೊಗಸಾಗಿತ್ತು ಮತ್ತು ಹಸಿರಿನಿಂದ ಕೂಡಿತ್ತು .




ಸ್ವಲ್ಪ ವಿಶ್ರಾಂತಿ ಪಡೆದು ಮುಂದಕ್ಕೆ ಪ್ರಯಾಣ ಬೆಳೆಸಿದೆವು ಮುಂದೆ ಕಾಲು ದಾರಿ ಮುಗಿದು ಜೀಪ್ ರಸ್ತೆಗೆ ಸೇರಿದೆವು ಇಲ್ಲಿಂದ ಸುಮಾರು 1/2 ಗಂಟೆ  ಕಾಲ ಜೀಪ್ ರಸ್ತೆಯಲ್ಲಿ ನಡೆದು ಮೂಕಾಂಬಿಕೆಯ ಮೂಲ ದೇವಸ್ಥಾನ ಬಳಿ ಬಂದಿದ್ದೆವು.




ಮೊದಲನೆಯದಾಗಿ ಅಲ್ಲೆ ಪಕ್ಕದಲ್ಲಿ ಇದ್ದ ಪೂಜಾರಿಯವರ ಮನೆಗೆ ತೆರಳಿ ರಾತ್ರಿ ಉಳಿದುಕೊಳ್ಳಲು ಜಾಗಕ್ಕೆ ವಿಚಾರಿಸಿದೆವು. ಪೂಜಾರಿಗಳಾದ ಪವಿತ್ರ ಭಟ್ ರವರು ಮನೆಯಲ್ಲಿ ಜಾಗ ಕೊಡಲು ಒಪ್ಪಿದರು ಮತ್ತು ಊಟಕ್ಕೂ ವ್ಯವಸ್ಥೆ ಮಾಡಿದರು. ನಮ್ಮ ಲಗೇಜ್ ಗಳನ್ನು ಅವರ ಮನೆಯಲ್ಲಿ ಇಟ್ಟು ಊಟ ಮುಗಿಸಿದೆವು(ಅನ್ನ ಸಾಂಬಾರ್ , ಪಲ್ಯ ಮತ್ತು ಮಜ್ಜಿಗೆ) ಸಮಯ ಸುಮಾರು 3 ಗಂಟೆ.

ಇಲ್ಲಿಂದ ನಮ್ಮ ಪಯಣ ಕೊಡಚಾದ್ರಿಯ ಸರ್ವಜ್ಞ ಪೀಠದ ಕಡೆಗೆ  ಮೊದಲು ಸಿಕ್ಕಿದ್ದು ಗಣಪತಿ ಗುಹೆ



ನಂತರ 20 ನಿಮಿಷ ನಡೆದ ನಂತರ ತುದಿಗೆ ಅಂದರೆ ಸರ್ವಜ್ಞ ಪೀಠದ ಬಳಿ ಬಂದೆವು  ಅಷ್ಟರಲ್ಲಿ ಪೂರ್ತಿಯಾಗಿ ಮಂಜು ಕವಿಯಿತು.



ಇಲ್ಲಿಂದ ಮುಂದೆ ಚಿತ್ತಮೂಲ ಕಡೆಗೆ ಹೊರೆಟೆವು ತುಂಬಾ ಕಿರಿದಾದ ಮತ್ತು ಇಳಿಜಾರದ ದಾರಿಯಲ್ಲಿ ಸುಮಾರು 15 ನಿಮಿಷ ನಡೆದ ನಂತರ ಚಿತ್ತಮೂಲ ತಲುಪಿದೆವು. ಇದು ಸೌಪರ್ಣಿಕ ನದಿಯ ಉಗಮ ಸ್ಥಾನ , ಚಿತ್ರಮೂಲದ ಕಲ್ಲು ಬಂಡೆಯ ನಡುವೆ ಯಾವಾಗಲೂ ನೀರು ಹನಿಯುತ್ತಿರುತ್ತದೆ.  



ಮತ್ತೆ ವಾಪಸ್ ಸರ್ವಜ್ಞ ಪೀಠಕ್ಕೆ ಬಂದು ಅಲ್ಲಿಂದ ಕೆಳಕ್ಕೆ ಅಂದರೆ ಭಟ್ಟರ ಮನೆಗೆ ಬಂದಾಗ ಸಮಯ ಸುಮಾರು 6.30 ನಿಮಿಷ,


ಭಟ್ಟರ ಮನೆಯಲ್ಲಿ ಸುಮಾರು ಹೊತ್ತು ಹರಟೆ ಹೊಡೆದು 8 ಗಂಟೆಗೆ ಊಟಕ್ಕೆ ಹೊರೆಟೆವು, ಹೊಟ್ಟೆ ಖಾಲಿಯಾಗಿತ್ತು ಅನ್ನ ಸಾಂಬಾರ್ ರುಚಿಯಾಗಿತ್ತು ಎರೆಡೆರೆಡು ಸುತ್ತು ತಿಂದು ಭಟ್ಟರ ಮನೆಗೆ ಬಂದೆವು, ಅಷ್ಷರಲ್ಲಿ ಭಟ್ಟರು ಮಲಗಲು ಚಾಪೆ ಮತ್ತು ಹೊದಿಕೆ ಗಳನ್ನು ತಂದು ಕೊಟ್ಟರು ಎಲ್ಲರೂ ಸೇರಿ ಅದನ್ನು ಹಾಸಿ ಮಲಗಳು ರೆಡಿ ಮಾಡಿದೆವು, ನಾಳೆಯ ಚಾರಣದ ಬಗ್ಗೆ (ಅರಿಶಿನಗುಂಡಿ ಜಲಪಾತ) ಮಾತುಕತೆ ನಡೆಸಿ ಬೆಳಗ್ಗೆ ಬೇಗ ಹೊರಡುವುದೆಂದು ತೀರ್ಮಾನಿಸಿ ನಿದ್ದೆಗೆ ಜಾರಿದೆವು , ರಾತ್ತಿಯೆಲ್ಲಾ ಜೋರು ಮಳೆ.

ನಮ್ಮ ನಾಳಿನ ಪಯಣ ಅರಿಶಿನ ಗುಂಡಿ ಜಲಪಾತಕ್ಕೆ


No comments:

Post a Comment