ಅರಿಶಿನಗುಂಡಿ ಜಲಪಾತ

DAY - 2 (18-09-2016)

ಬೆಳಗ್ಗೆ ಎದ್ದು ಬ್ರೆಷ್ ಮಾಡಿ ಎಲ್ಲರೂ ರೆಡಿಯಾಗಿ ಲೆಮನ್ ಟೀ ಕುಡಿದು ಭಟ್ಟರಿಗೆ ಧನ್ಯವಾದ ತಿಳಿಸಿ ಕರೆಕಟ್ಟೆ ಹೋಗುವ ದಾರಿಯಲ್ಲಿ ಚಾರಣ ಶುರು ಮಾಡಿದೆವು. ಸಮಯ ಸುಮಾರು 7.30 ನಿಮಿಷ.





ದಾರಿ  ಇಳಿಮುಖವಾಗಿದ್ದರಿಂದ  ಎಲ್ಲೂ ಬ್ರೇಕ್ ತೆಗೆದುಕೊಳ್ಳದೆ ಸುಮಾರು 1 ಗಂಟೆಯಲ್ಲಿ  ಸಂತೋಷ್ ಹೋಟಲ್ ತಲುಪಿದೆವು. ಇಲ್ಲಿಂದ ಅರಿಶಿನಗುಂಡಿ ಜಲಪಾತಕ್ಕೆ ಹೋಗುವ ಯೋಜನೆ ನಮ್ಮದಾಗಿತ್ತು. ಆದರೆ 2 ತೊಂದರೆ 1) ಅರಣ್ಯ ಇಲಾಖೆಯವರ ಅನುಮತಿ ಪಡೆಯ ಬೇಕು 2) ಗೈಡ್ ಇಲ್ಲದೆ ಚಾರಣ ಮಾಡಲು ಸಾಧ್ಯವಿಲ್ಲ.


ಮೊದಲನೆಯದಾಗಿ ಹೋಟೆಲ್ ನಲ್ಲಿ ಗೈಡ್ ಬಗ್ಗೆ ವಿಚಾರಿಸಿದೆವು ಅವರು ದೂರವಾಣಿ ಮೂಲಕ ಸಂಪರ್ಕಿಸಿ 1/2 ಗಂಟೆ ಯಲ್ಲಿ ಬರುವರೆಂದು ತಿಳಿಸಿದರು ಒಂದು ಕೆಲಸ ಮುಗಿದಿತ್ತು. ಎರಡೆನೆಯದು ಅನುಮತಿ ಹೋಟೆಲ್ ಎದುರುಗಡೆ ಇದ್ದ ಅರಣ್ಯ ಇಲಾಖೆಯ ಕಛೇರಿಗೆ ನರೇಶ್ ಮತ್ತು ದಿನಕರ್ ಅನುಮತಿ ಪಡೆಯಲು ಹೋದರು, ನರೇಶ್ ಗೆ ಅರಣ್ಯ ಇಲಾಖೆಯಲ್ಲಿ ಪರಿಚಯವಿರುವವರಿಂದ ದೂರವಾಣಿ ಮಾಡಿಸಿ ಅನುಮತಿ ಪಡೆಯಲು ಸಫಲರಾದರು. ಈಗ ನೆಮ್ಮದಿಯಿಂದ ಎಲ್ಲರೂ ಇಡ್ಲಿ ತಿಂದು ಮದ್ಯಾಹ್ನಕ್ಕೂ ಪಾರ್ಸಲ್ ಮಾಡಿಸಿಕೊಡೆವು. ಗೈಡ್ ಇನ್ನು ಬಂದಿರಲಿಲ್ಲ. ಧನರಾಜ್ ಮತ್ತು ದಿನಕರ್ ಜಿಗಣೆಯಿಂದ ತಪ್ಪಿಸಿಕೊಳ್ಳಲು ವಿಶೇಷವಾದ ಪಾನೀಯ(ನಶೆ , ಉಪ್ಪು, ಸುಣ್ಣ ಮತ್ತು ನೀರು) 4 ಬಾಟಲ್ ಗಳನ್ನು ರೆಡಿಮಾಡಿದರು


 ಅಷ್ಟರಲ್ಲಿ ಗೈಡ್ ಬಂದರು ಹೆಸರು ರಾಜು , ಸಂತೋಷ್ ಹೋಟಲಿನಿಂದ ಕರೆಕಟ್ಟೆ ಬರುವ ದಾರಿಯಲ್ಲಿ 1/2 ಕಿ.ಮೀ ನಡೆದು ಎಡಕ್ಕೆ ಕಾಡಿನ ಒಳಗೆ ಪ್ರವೇಶಿಸಿದೆವು. 





ಇಲ್ಲಿಂದ ಮುಂದೆ ಯಾವುದೇ ದಾರಿ ಇರಲಿಲ್ಲ ಗೈಡ್ ರಾಜುರವರು ಮುಂದೆ ದಾರಿ ಮಾಡಿಕೊಂಡು ಹೋಗುತ್ತಿದ್ದರು ನಾವು ಅವರ ಹಿಂದೆ ಸಾಗುತ್ತದ್ದೆವು. ದಾರಿ ತುಂಬಾ ಜಾರುತಿತ್ತು ಮತ್ತು ಜಿಗಣೆಗಳ ಕಾಟ ಶುರುವಾಯಿತು. ಎಲ್ಲೂ ನಿಲ್ಲುವವಾಗಿರಲಿಲ್ಲ ನಿಂತರೆ 4 ರಿಂದ 5 ಜಿಗಣೆಗಳು ಕಾಲುಗಳ ಮೇಲೆ ಹಾಜರಾಗುತ್ತಿದ್ದವು. 



ಸುಮಾರು 30 ನಿಮಿಷದ ನಂತರ ನೀರಿನ ತೊರೆ ಸಿಕ್ಕಿತು ಇದನ್ನು ದಾಟಿದೆವು. ಮುಂದೆ ಏರು ದಾರಿಯಲ್ಲಿ ನಡೆದು ಜೀಪ್ ಟ್ರಾಕ್ (ಕಚ್ಚಾ ರಸ್ತೆ) ತಲುಪಿದೆವು. ಇಲ್ಲಿಂದ ಮತ್ತೆ ಬಲಕ್ಕೆ ಇಳಿಜಾರಿನಲ್ಲಿ ಇಳಿದೆವು ಇಲ್ಲಿ ಯಾವುದೇ ಕಾಲುದಾರಿ ಇರಲಿಲ್ಲ ಸಲ್ಪ ದೂರ ಸಾಗಿದ ಮೇಲೆ ರಾಜುರವರು ದಾರಿ ತಪ್ಪಿದ್ದರು ಎಲ್ಲರೂ ಆತಂಕಕ್ಕೆ ಒಳಗಾದೆವು ಏಕೆಂದರೆ ಜಿಗಣೆಗಳ ಕಾಟ ಎಷ್ಟಿಂತೆಂದರೆ ಊಹಿಸಲು ಸಾಧ್ಯವಿಲ್ಲ. ಅಂತಿಮವಾಗಿ ಗೈಡ್ ರಾಜುರವರ ಪ್ರಯತ್ತದಿಂದ ಬಹಳ ಸಮಯದ ನಂತರ ಒಂದು ಕಾಲು ದಾರಿಗೆ ಸೇರಿದೆವು ಅಲ್ಲಿಂದ ಮುಂದೆ 10 ನಿಮಿಷದಲ್ಲಿ ಜಲಪಾತದ ಮುಂದೆ ಬಂದು ನಿಂತಿದ್ದೆವು, ಇಲ್ಲಿಯವರೆಗೂ ಅನುಭವಿಸಿದ ಕಷ್ಟವೆಲ್ಲ್ಲಾ ಒಂದೇ ಕ್ಷಣದಲ್ಲಿ ಮಾಯವಾಗಿತ್ತು.









    ನೀರಿನಲ್ಲಿ ತುಂಬಾ ಸಮಯ ಕಳೆದ ನಂತರ  ತಂದಿದ್ದ  ಇಡ್ಲಿ ತಿಂದು ಮತ್ತೆ 30 ನಿಮಿಷ ನಡೆದು ಜೀಪ್ ಟ್ರಾಕ್ ತಲುಪಿದೆವು. ಗೈಡ್ ರಾಜುರವರಿಗೆ ಧನ್ಯವಾದ ತಿಳಿಸಿ ಅವರನ್ನು ಕಳುಹಿಸಿ ನಾವು ಮೂಕಾಂಬಿಕೆ ಆಭಯಾರಣ್ಯದ ಪ್ರವೇಶ ದ್ವಾರಕ್ಕೆ ಜೀಪ್ ಟ್ರಾಕ್ ನಲ್ಲಿ ಹೊರೆಟೆವು ಇಲ್ಲಿಂದ ಪ್ರವೇಶ ದ್ವಾರಕ್ಕೆ  ಸುಮಾರು 7 ಕಿ. ಮೀ ದೂರ. ಸುಮಾರು 1.30 ನಿಮಿಷಗಳ ಸತತವಾಗಿ ಕಾಡಿನಲ್ಲಿ ನಡೆದು ಮುಖ್ಯದ್ವಾರ ತಲುಪಿದಾಗ ಸಮಯ ಸುಮಾರು 2.30 ನಿಮಿಷ. ಇಲ್ಲಿಂದ ಆಟೋನಲ್ಲಿ ಕೊಲ್ಲೂರಿಗೆ(2ಕಿ.ಮೀ) ಹೋಗಿ ಮೂಕಾಂಬಿಕೆ ದರ್ಶನ ಪಡೆದೆವು.
 


 ಇಲ್ಲಿಗೆ ನಮ್ಮ 2 ದಿನದ ಹಿಡ್ಲುಮನೆ ಜಲಪಾತ - ಕೊಡಚಾದ್ರಿ -ಅರಿಶಿನಗುಂಡಿ ಜಲಪಾತ ಚಾರಣ ಯಶಸ್ವಿಯಾಗಿತ್ತು ಮತ್ತು ಚಾರಣದ ಪ್ರತಿಯೊಂದು ಕ್ಷಣವು ನಮ್ಮ  ನೆನಪಿನಲ್ಲಿ ಸದಾ ಕಾಲ ಉಳಿಯುವಂತಾಯಿತು.

ಮಾಹಿತಿ:
ಕೊಡಚಾದ್ರಿಯ ಪವಿತ್ರಭಟ್ಟರ ರ  ಸಂಖ್ಯೆ :
ಅರಿಶಿನಗುಂಡಿಯ ಗೈಡ್ ರಾಜುರವರ ಸಂಖ್ಯೆ : 9535796525



No comments:

Post a Comment