ಮಳೆಗಾಲದಲ್ಲೊಂದು ಬೈಕ್ ಸವಾರಿ


 
ಮಳೆಗಾಲ ಬಂತೆಂದರೆ ಜಲಪಾತಗಳು ಜೀವಕಳೆ ಪಡೆದುಕೊಳ್ಳುತ್ತವೆ , ಈ ಸಮಯದಲ್ಲಿ ಜಲಪಾತಗಳನ್ನು ನೋಡುವುದೇ ಒಂದು ಸುಂದರ ಅನುಭವ .

ಈ ಸಲ ಉಡುಪಿ ಜಿಲ್ಲೆಯ  ಶಿರೂರು ಸಮೀಪವಿರುವ  ಕೂಸಳ್ಳಿ ಜಲಪಾತ , ಭಟ್ಕಳ ಸಾಗರ ರಸ್ತೆಯಲ್ಲಿರುವ ಬೀಮೇಶ್ವರ ಜಲಪಾತ , ಹುಲಿಕಲ್ ಘಾಟ್ ಹಾಗೂ ಮೆಟ್ಕಲ್ ಗಣಪತಿ ಗುಡ್ಡಕ್ಕೆ  ಬೈಕಿನಲ್ಲಿ  ಸವಾರಿ ಹೋಗುವುದೆಂದು ಯೋಜನೆ ರೆಡಿಯಾಯಿತು.



ಮೊದಲು ನಾಲ್ಕು ಜನರಿದ್ದ ( ನಾನು , ದಿನಕರ್ , ನರೇಶ್ ಮತ್ತು ಧನರಾಜ್) ತಂಡಕ್ಕೆ  ಮತ್ತೆ ನಾಲ್ಕು ಜನ (ಪ್ರಸನ್ನ , ಗುರುಪ್ರಸಾದ್ , ದಿನೇಶ್ ಹಾಗೂ ಶಶಿಧರ್ ) ಸೇರ್ಪಡೆಯಾದರು  ಈಗ ತಂಡದ ಮೊತ್ತ 8. 

ನಾನು , ದಿನಕರ್ , ಶಶಿಧರ್ , ಪ್ರಸನ್ನ ಮತ್ತು ದಿನೇಶ್ ಬೆಂಗಳೂರಿನಿಂದ , ನರೇಶ್  ಮತ್ತು ಗುರುಪ್ರಸಾದ್ ಬೆಳ್ತಂಗಡಿಯಿಂದ ಮತ್ತು ಧನರಾಜ್ ಚಿಕ್ಕಮಗಳೂರಿನಿಂದ.

ಎಲ್ಲರೂ ಮಣಿಪಾಲಿನ ರಾಯಲ್ ಬ್ರದರ್ಸ್ ಬೈಕ್ ಸೆಂಟರ್ ಹತ್ತಿರ ಸೇರುವುದೆಂದು ತೀರ್ಮಾವಾಯಿತು.

DAY  1 

 ದಿನಕರ್ ಮತ್ತು ನಾನು ಕಾರ್ಕಳದ ದಿನಕರ್ ಮನೆಯಿಂದ ಹೊರಡಲು ರೆಡಿಯಾದೆವು , ಅಲ್ಲಿಗೆ ನರೇಶ್ ಮತ್ತು ಗುರುಪ್ರಸಾದ್ ಬಂದು ಸೇರಿದರು. ದಿನಕರ್ ಮನೆಯಲ್ಲಿ ಎಲ್ಲರೂ ತಿಂಡಿ ತಿಂದು ಟೀ ಕುಡಿದು ಹೊರಟಾಗ ಸಮಯ ಬೆಳಗ್ಗೆ 7.30 , ಜಿಟಿ ಜಿಟಿ ಮಳೆಯಲ್ಲೆ ನಮ್ಮ ಪಯಣ ಆರಂಭವಾಯಿತು. ಅಲ್ಲಿಂದ ಅಜೆಕಾರ್ ಮೂಲಕ ಮಣಿಪಾಲ್ ಬಂದು ಸೇರಿದಾಗ ಸಮಯ 8.30. ಇನ್ನು ಯಾರು ಬಂದಿರಲಿಲ್ಲ . ಚಿಕ್ಕ ಪೋಟೊ ಸೇಷನ್ ನಡೆಯಿತು. 












ಅಷ್ಟರಲ್ಲಿ ಧನರಾಜ್ , ದಿನೇಶ್ , ಪ್ರಸನ್ನ ಮತ್ತು ಶಶಿಧರ್ ಅಲ್ಲಿಗೆ ಬಂದು ಸೇರಿದರು. ತಡಮಾಡದೆ ಎರಡು ಬೈಕ್ ಗಳನ್ನು ಬಾಡಿಗೆಗೆ ಪಡೆದರು. ಈಗ ನಾಲ್ಕು ಬುಲೆಟ್ ಗಳು ಹೊರಡಲು ರೆಡಿಯಾಗಿದ್ದವು . ಸಮಯ ಸುಮಾರು 9.45 ನಿಮಿಷ .

ಅಲ್ಲಿಂದ ನೇರವಾಗಿ ಉಡುಪಿ - ಕುಂದಾಪುರ  ಮುಖಾಂತರ ಶಿರೂರು ಕಡೆಗೆ ಪ್ರಯಾಣ ಬೆಳೆಸಿದೆವು.  ಸುಮಾರು 1 ಗಂಟೆ ಪ್ರಯಾಣದ ನಂತರ ಮರವಂತೆ ಬಳಿಯ ಸಮುದ್ರ ತೀರಕ್ಕೆ ಬಂದು ಸೇರಿದ್ದೆವು. ಇಲ್ಲಿ ಸುಮಾರು 1/2 ಗಂಟೆಗಳ ಕಾಲ ಸಮಯ ಕಳೆದೆವು. 






















ಪೋಟೊ ಸೇಷನ್ ನಂತರ   ಮನೆಯಿಂದ ತಂದಿದ್ದ ನೀರು ದೋಸೆ ತಿಂದು ಅಲ್ಲೆ ಪಕ್ಕದಲ್ಲಿದ್ದ ಅಂಗಡಿಯಲ್ಲಿ ಬಿಸಿ ಬಿಸಿ ಟೀ ಕುಡಿದು ಮತ್ತೆ ಪ್ರಯಾಣ ಮುಂದುವರೆಸಿದೆವು .



 "ಮುಂದಿನ ಪಯಣ.........  ಕೂಸಳ್ಳಿ ಜಲಪಾತಕ್ಕೆ"









No comments:

Post a Comment