ಕುಪ್ಪಳ್ಳಿ ‘ಕವಿಮನೆ’


ಕುಪ್ಪಳ್ಳಿ - ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಒಂದು ಹಳ್ಳಿ. ರಾಷ್ಟ್ರಕವಿ ಕುವೆಂಪುರವರು ಜನಿಸಿದ ಊರು. ಇಲ್ಲಿ ಕುವೆಂಪು ಅವರ ಮನೆಯನ್ನು ಸ್ಮಾರಕವನ್ನಾಗಿ ಮಾಡಲಾಗಿದೆ. ಅದೇ ‘ಕವಿಮನೆ’, ಇದು ಒಂದು ಪ್ರವಾಸೀ ಸ್ಥಳವಾಗಿಯೂ ರೂಪುಗೊಂಡಿದೆ. ಮೂರು ಮಾಳಿಗೆಯನ್ನು ಹೊಂದಿರುವ ಮನೆಯನ್ನು ಮೂಲರೂಪದಲ್ಲೇ ಉಳಿಸಿಕೊಳ್ಳಲಾಗಿದ್ದು, ಈ ಮನೆಯಲ್ಲಿ ಪೂರ್ವಜರು ಬಳಸುತ್ತಿದ್ದ ಬೀಸುವ ಕಲ್ಲು, ಬುಟ್ಟಿಗಳು, ಪೆಟ್ಟಿಗೆಗಳು, ಕುಕ್ಕೆ, ಹೊರಳುಕಲ್ಲು, ಮಚ್ಚು, ಹಂಡೆ, ಪಾತ್ರೆ-ಪಗಡಿ, ಬಟ್ಟೆ-ಬರೆ, ಕುವೆಂಪು ಅವರಿಗೆ ಸಂದ ಸನ್ಮಾನ ಪತ್ರಗಳು, ಗೌರವ ಡಾಕ್ಟರೇಟುಗಳು, ಅವರ ಪುಸ್ತಕಗಳು, ಅವರ ಬಗ್ಗೆ ಬಂದಿರುವ ಪುಸ್ತಕಗಳು, ಅವರು ಬಳಸುತ್ತಿದ್ದ ವಸ್ತುಗಳನ್ನು ಜೋಡಿಸಿಡಲಾಗಿದೆ. ಈ ಮನೆಯನ್ನು ನೋಡಲು ಸುಮಾರು 1 ಗಂಟೆ ಬೇಕು. ಸ್ವಲ್ಪ ದೂರದಲ್ಲಿ ಕವಿಶೈಲವಿದೆ. ಅಲ್ಲಿ ಕುವೆಂಪುರವರ ಸಮಾಧಿ ಇದೆ














No comments:

Post a Comment